
ಲೈವ್ ಟಿವಿ ನ್ಯೂಸ್

ದಿನಾಂಕ : 26-08-2025
ರೈತರ ಹಾಗೂ ಜನರ ಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಪ್ರಥಮ ಕರ್ತವ್ಯ ಸಚಿವರು ಈಶ್ವರ ಖಂಡ್ರೆ.
ವರದಿಗಾರರು : ಬಸವರಾಜ ಪೂಜಾರಿ
ವರದಿ ಸ್ಥಳ :ಬೀದರ
ಒಟ್ಟು ಓದುಗರ ಸಂಖ್ಯೆ : 51+
ರೈತರ ಹಾಗೂ ಜನರ ಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಪ್ರಥಮ ಕರ್ತವ್ಯ ಸಚಿವರು ಈಶ್ವರ ಖಂಡ್ರೆ. ಬೀದರ ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಭಾರಿ ಮಳೆಯಿಂದ ಕಮಲನಗರ್ ಹಾಗೂ ಔರಾದ್(ಬಿ) ತಾಲೂಕಿನ ಅನೇಕ ಗ್ರಾಮಗಳಲ್ಲಿ ಬೆಳೆ, ರಸ್ತೆ, ಸೇತುವೆ ಹಾಗೂ ಕೇರೇಕಟ್ಟೆಗಳಿಗೆ ಗಂಭೀರ ಹಾನಿ ಸಂಭವಿಸಿದ ಹಿನ್ನಲೆ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರು ಇಂದು ಅಕನಾಪುರ್, ಮುತಖೇಡ್, ನಂದಿ ಬಿಜಲಗಾವ್ ಹಾಗೂ ಹೋಕರಾಣಾ ಗ್ರಾಮಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲನೆ ನಡೆಸಿದ ಮಾತನಾಡಿದ ಸಚಿವರು ಹಾನಿಯ ವಿವರಗಳನ್ನು ಸರ್ಕಾರದ ಗಮನಕ್ಕೆ ತಂದು ತ್ವರಿತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಹಾಗೂ ರೈತರಿಗೆ ವಿಮಾ ಕಂಪನಿಗಳ ಮೂಲಕ ಬೆಳೆ ವಿಮೆ ದೊರಕುವಂತೆ ಸಹ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಮಳೆ ಆದರಿತ ಬೇಳೆಗಳಿಗೆ ಎಕರೆಗೆ ಎಂಟು ಸಾವಿರ ತೋಟಗಾರಿಕೆ ಬೆಳಗಳಿಗೆ ಹದಿನೆಂಟು ಸಾವಿರ ರೂಪಾರಿಗಳನ್ನು NDRF ಅಡಿಯಲ್ಲಿ ಪರಿಹಾರ ನೀಡಲಾಗುವುದು ಎಂದು ತಿಳಿಸಿ ಮಳೆಯಿಂದ ಹಾನಿಗೊಳಗಾದ ಬೆಳೆಗಳ ಸಮೀಕ್ಷೆ ಮಾಡುವಂತೆ ಆದೇಶ ಮಾಡಿ ಮಳೆಯಿಂದ ಹಾನಿಗೊಳಗಾದ ಕರೆಗಳ ಸುಸ್ಥಿತಿಗೆ ಬೇಕಾಗುವ ಯೋಜನೆಗಳನ್ನು ಕೂಡಲೆ ಸಿದ್ದಪಡಿಸುವಂತೆ ಆದೇಶ ಮಾಡಿದರು
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















