
ಲೈವ್ ಟಿವಿ ನ್ಯೂಸ್

ದಿನಾಂಕ : 18-09-2025
ಮುಖ್ಯಾಧಿಕಾರಿ ಸಚಿವರ ಕೈ ಗೊಂಬೆ ಆರೋಪ ಸುಳ್ಳು
ವರದಿಗಾರರು : ರಾಜಶೇಖರ್
ವರದಿ ಸ್ಥಳ :ವಿಜಯಪುರ
ಒಟ್ಟು ಓದುಗರ ಸಂಖ್ಯೆ : 13+
ಮನಗೂಳಿ ಪಟ್ಟಣ ಪಂಚಾಯತಿ ಸದಸ್ಯರಿಂದ ಬಸವನಬಾಗೇವಾಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು . ಮನಗೂಳಿ ಪಟ್ಟಣ ಪಂಚಾಯಿತಿ ಅವಿಶ್ವಾಸ ಸಭೆ | ಹಂಗಾಮಿ ಅಧ್ಯಕ್ಷ ಬಿರಾದಾರ ಹೇಳಿಕೆ
ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಈಚೆಗೆ ನಡೆದಿದ್ದ ಅವಿಶ್ವಾಸ ಪ್ರಕ್ರಿಯೆಯಲ್ಲಿ ಸಚಿವ ಶಿವಾನಂದ ಪಾಟೀಲರ ಕೈಗೊಂಬೆಯಾಗಿ ಮುಖ್ಯಾಧಿಕಾರಿಗಳು ನಡೆದುಕೊಂಡಿದ್ದಾರೆ ಎಂಬ ಮಾಜಿ ಅಧ್ಯಕ್ಷ ಎಂ.ಡಿ.ಮೇತ್ರಿ ಅವರ ಆರೋಪ ಶುದ್ಧ ಸುಳ್ಳು," ಎಂದು ಪಟ್ಟಣ ಪಂಚಾಯಿತಿ ಹಂಗಾಮಿ ಅಧ್ಯಕ್ಷ ಶೇಕಪ್ಪಗೌಡ ಬಿರಾದಾರ, ಸದಸ್ಯ ಭಾಗ್ಯರಾಜ ಸೊನ್ನದ, ಅಜಿತ್ ಜಾನಕರ, ಶಂಕರ ಶಿವಮತ ಹೇಳಿದರು.
ಸಂಜೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಮುಖ್ಯಾಧಿಕಾರಿ ನಿಖಿಲ್ ಯಾವುದೇ ಗದ್ದಲಕ್ಕೆ ಅವಕಾಶ ಕೊಡದೇ ಕಾರ್ಯ ನಿರ್ವಹಿಸಿದ್ದಾರೆ. ಇದೇ ಸಮಯದಲ್ಲಿ ಪಟ್ಟಣ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















