ವರದಿಗಾರರು :
ಅರ್ಕೇಶ್ ||
ಸ್ಥಳ :
ರಾಮನಗರ
ವರದಿ ದಿನಾಂಕ :
20-11-2025
ರಾಮನಗರದಲ್ಲಿ ವೃದ್ಧ ದಂಪತಿ ಕೆರೆಯಲ್ಲಿ ಮುಳುಗಿ ದುರ್ಘಟನೆ
ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲ್ಲೂಕಿನ ಗುಂಗರಹಳ್ಳಿ ಗ್ರಾಮದಲ್ಲಿ ದುಃಖದ ಘಟನೆ ಸಂಭವಿಸಿದೆ. ಕುರಿಗಳನ್ನು ತೊಳೆಯಲು ಕೆರೆಗೆ ಹೋಗಿದ್ದ ವೃದ್ಧ ದಂಪತಿ ಲಕ್ಷಣ (71) ಮತ್ತು ಪತ್ನಿ ಜಯಮ್ಮ (65) ಮುಳುಗಿ ಸಾವನ್ನಪ್ಪಿದರು. ಜಯಮ್ಮನ ಮೃತದೇಹ ಪತ್ತೆಯಾಗಿದ್ದು, ಲಕ್ಷಣನಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಘಟನೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
