ನಲ್ಲೂರು ಜ್ಯುಯಲರ್ಸ್ ಕುಟುಂಬದಿಂದ ಕೊಡುಗೆ.

ವರದಿಗಾರರು : ದರ್ಶನ್ ಎಂ. ಎನ್ || ಸ್ಥಳ : ದಾವಣಗೆರೆ
ವರದಿ ದಿನಾಂಕ : 23-12-2025

ನಲ್ಲೂರು ಜ್ಯುಯಲರ್ಸ್ ಕುಟುಂಬದಿಂದ ಕೊಡುಗೆ.

ದಾವಣಗೆರೆ ವೈಕುಂಠ ಟ್ರಸ್ಟ್ಗೆ ಸುಮಾರು 15 ಲಕ್ಷ ವೆಚ್ಚದ ಮೋಕ್ಷ ವಾಹಿನಿ ವಾಹನವನ್ನು ನಲ್ಲೂರು ಜ್ಯುಯಲರ್ಸ್ ಮಾಲೀಕ, ಕಾಂಗ್ರೆಸ್ ಮುಖಂಡ ನಲ್ಲೂರು ಎಸ್.ರಾಘವೇಂದ್ರ ಮತ್ತು ಕುಟುಂಬ ವರ್ಗವು ವೈಕುಂಠ ಟ್ರಸ್ಟ್ಗೆ ಹಸ್ತಾಂತರಿಸಿತು

ನಗರದ ಜಿಲ್ಲಾ ವರದಿಗಾರರ ಕೂಟದ ಬಳಿ ಸೋಮವಾರ ಬೆಳಿಗ್ಗೆ ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ, ವಿರಕ್ತ ಮಠದ ಶ್ರೀಬಸವಪ್ರಭು ಸ್ವಾಮೀಜಿ ಸಮಕ್ಷಮದಲ್ಲಿ ನಲ್ಲೂರು ಅರುಣಾಚಲ, ನಲ್ಲೂರು ರಾಘವೇಂದ್ರ, ಜಯಲಕ್ಷಿ ರಾಘವೇಂದ್ರ ಕುಟುಂಬವು ರಾಘವೇಂದ್ರ ಕನಸಿನ ಸೇವೆಯಾದ ಮೋಕ್ಷ ವಾಹಿನಿಯನ್ನು ವೈಕುಂಠ ಟ್ರಸ್ಟ್ಗೆ ಹಸ್ತಾಂತರಿಸಿ, ಶುಭಾರೈಸಿದರು.

ಇದೇ ವೇಳೆ ಮಾತನಾಡಿದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ, ವೈಕುಂಠ ಟ್ರಸ್ಟ್ ಗೆ ಏನು ಅಗತ್ಯವಿದೆಯೋ ಅದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡ ನಲ್ಲೂರು ರಾಘವೇಂದ್ರ ಸುಮಾರು 15 ಲಕ್ಷ ರು. ವೆಚ್ಚದಲ್ಲಿ ಶವ ಸಂಸ್ಕಾರಕ್ಕೆ ಅಗತ್ಯವಾದ ವ್ಯವಸ್ಥಿತ ಮೋಕ್ಷ ವಾಹಿನಿ ವಾಹನವನ್ನು ಹಸ್ತಾಂತರಿಸಿದ್ದಾರೆ. ಬಡವರು, ಕಡು ಬಡವರು, ಅಸಹಾಯಕರ ಕುಟುಂಬದ ಆರ್ಥಿಕ ಹೊರೆ ಇಳಿಸುವ ಕಳಕಳಿಯೂ ರಾಘವೇಂದ್ರ ಸೇವೆಯಲ್ಲಿ ಅಡಗಿದೆ ಎಂದರು.

ಕೇವಲ ವೈಕುಂಠ ಟ್ರಸ್ಟ್ಗೆ ಸೀಮಿತವಾಗದೇ, ದಾವಣಗೆರೆ ಜಿಲ್ಲಾ ಕೇಂದ್ರದ ಸಾರ್ವಜನಿಕ ಹಿಂದೂ ರುದ್ರಭೂಮಿ, ಶಾಮನೂರು, ಕುಂದುವಾಡ ಸೇರಿದಂತೆ ಯಾರಿಗೆ ಅಗತ್ಯವಿರುತ್ತದೋ ಅಂತಹವರು ಟ್ರಸ್ಟ್ಗೆ ಸಂಪರ್ಕಿಸಿ, ಮೋಕ್ಷ ವಾಹಿನಿ ಸೇವೆ ಪಡೆಯಬಹುದು. ಮಿತ ಮಾತಿನ, ನಗು ಮೊಗದ ನಲ್ಲೂರು ರಾಘವೇಂದ್ರ ತಮ್ಮ ತಂದೆ, ತಾಯಿ, ಹಿರಿಯರಂತೆ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಸರಳವಾಗಿ ಟ್ರಸ್ಟ್ಗೆ ಮೋಕ್ಷ ವಾಹಿನಿ ಹಸ್ತಾಂತರಿಸಿದ್ದು, ಇನ್ನೂ ಹೆಚ್ಚಿನ ಸೇವೆ ಮಾಡುವ ಶಕ್ತಿಯನ್ನು ದೇವರು ನಲ್ಲೂರು ರಾಘವೇಂದ್ರ ಕುಟುಂಬಕ್ಕೆ ನೀಡಲಿ ಎಂದು ಹಾರೈಸಿದರು.

ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ದಾವಣಗೆರೆ ಹಳೆ ಪಿಬಿ ರಸ್ತೆಯಲ್ಲಿ ವೈಕುಂಠ ಧಾಮ ಟ್ರಸ್ಟ್ಗೆ 3 ಎಕರೆ ಜಾಗ ದಾನ ಮಾಡುವ ಮೂಲಕ ಸಮಾಜಕ್ಕೆ ತಮ್ಮ ಸೇವೆ ಸಮರ್ಪಿಸಿದ್ದಾರೆ. ಚಿನ್ನಾಭರಣ ಅಂಗಡಿಗಳಿಗೆ ಹೆಸರಾದ ನಲ್ಲೂರು ಕುಟುಂಬವು ಸದ್ದಿಲ್ಲದೇ ಸೇವೆಯಿಂದಲೂ ಇತರರಿಗೂ ಪ್ರೇರಣೆಯಾಗಿದೆ. ಯಾವುದೇ ಆಡಂಬರವಿಲ್ಲದೇ, ಸರಳತೆಯ ಗುಣವನ್ನು ಮೈಗೂಡಿಸಿಕೊಂಡ ನಲ್ಲೂರು ರಾಘವೇಂದ್ರ ಸೇವೆ ಇತರರಿಗೂ ಮಾದರಿಯಾಗಿದೆ. ಮನುಷ್ಯನ ಅಂತಿಮ ಯಾತ್ರೆಗೆ ಮುಕ್ತಿ ವಾಹನಗಳ ಅಗತ್ಯವಿತ್ತು. ವಿರಕ್ತ ಮಠದಲ್ಲೂ ಇಂತಹ ಸೇವೆ ಇದೆ. ರಾಘವೇಂದ್ರ ಸೇವೆ ಇಂತಹ ಕಾರ್ಯದ ಮೂಲಕ ಸಾರ್ಥಕವಾಗಿದೆ ಎಂದು ಶ್ಲಾಘಿಸಿದರು.

ವೈಕುಂಠ ಟ್ರಸ್ಟ್ಗೆ ಮೋಕ್ಷ ವಾಹಿನಿ ವಾಹನ ಸಮರ್ಪಿಸುವ ಕಾರ್ಯವನ್ನು ವರದಿಗಾರರ ಕೂಟದ ಬಳಿ ಸರಳವಾಗಿ ಹಮ್ಮಿಕೊಂಡಿದ್ದು ರಾಘವೇಂದ್ರ ಕಾಳಜಿಗೆ ಸಾಕ್ಷಿ. ಸುಮಾರು 15-16 ಲಕ್ಷ ವೆಚ್ಚದಲ್ಲಿ ವಾಹನವನ್ನು ಶವ ಸಾಗಿಸಲು, ಏಕಕಾಲಕ್ಕೆ 12 ಜನ ಕುಳಿತು ವೈಕುಂಠ ಧಾಮ, ರುದ್ರಭೂಮಿಗೆ ಹೋಗುವಂತೆ ಮಾರ್ಪಡಿಸಲಾಗಿದೆ. ಮಾನವೀಯ ಕಾರ್ಯಕ್ಕೆ ಇಂತಹ ಸೇವೆಗಳಿಂದ ಅರ್ಥ ಬರುತ್ತದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ನಲ್ಲೂರು ರಾಘವೇಂದ್ರ, ಪತ್ನಿ ಜಯಲಕ್ಷಿ , ಕುಟುಂಬ ವರ್ಗ ಮಾಡಿರುವುದು ಸಾಕಷ್ಟು ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ಆಸರೆಯಾಗುವ ಕಾರ್ಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು

ನಲ್ಲೂರು ಜ್ಯುಯಲರ್ಸ್ ಮಾಲೀಕ, ದಾನಿ ನಲ್ಲೂರು ಎಸ್.ರಾಘವೇಂದ್ರ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಶವ ಸಂಸ್ಕಾರಕ್ಕೆ ಇರುವ ಗಾಡಿಗಳು ಸುಮಾರು 15-20 ವರ್ಷದಷ್ಟು ಹಳೆಯವು. ಹಾಗಾಗಿ ವೈಕುಂಠ ಧಾಮ ಟ್ರಸ್ಟ್ಗೆ ಸುಮಾರು 15 ಲಕ್ಷ ವೆಚ್ಚದಲ್ಲಿ ಮೋಕ್ಷ ವಾಹಿನಿ ವಾಹನವನ್ನು ಅರ್ಪಿಸುತ್ತಿದ್ದೇವೆ. ವೈಕುಂಠ ಧಾಮವಷ್ಟೇ ಅಲ್ಲ, ಸಾರ್ವಜನಿಕ ರುದ್ರಭೂಮಿ, ಶಾಬನೂರು ರುದ್ರಭೂಮಿ, ಕುಂದುವಾಡ ರುದ್ರಭೂಮಿ ಹೀಗೆ ಜಿಲ್ಲಾ ಕೇಂದ್ರದ ಎಲ್ಲಾ ಜಾತಿ, ಸಮುದಾಯದವರೂ ಇದರ ಸೇವೆ ಪಡೆಯಬಹುದು ಎಂದರು

ಈ ವೇಳೆ ಹಿರಿಯ ಚಿನ್ನಾಭರಣ ವರ್ತಕ ನಲ್ಲೂರು ಅರುಣಾಚಲ, ಪ್ರೇಮಾ ಅರುಣಾಚಲ, ಜಯಲಕ್ಷ್ಮೀ ರಾಘವೇಂದ್ರ ನಲ್ಲೂರು, ವೈಕುಂಠ ಟ್ರಸ್ಟ್ ನ ಮೋತಿ ಪರಮೇಶ್ವರ, ಬಾಲಕೃಷ್ಣ ವೈದ್ಯ, ಜಿಲ್ಲಾ ವರದಿಗಾರರ ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ, ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಆರ್.ಎಸ್.ತಿಪ್ಪೇಸ್ವಾಮಿ, ಪಿ.ಎಸ್.ಲೋಕೇಶ್, ಸಂಜಯ್ ಕುಂದುವಾಡ, ರಾಜೇಶ, ಅಜಯ್, ಪುರುಷೋತ್ತಮ ಪಟೇಲ್, ನಾಯಕ, ರಾಕೇಶ್ ಬೆಹಲ್, ಸಿದ್ದರಾಮೇಶ್ವರ, ಹೇಮಾ, ರಾಘವೇಂದ್ರ ಪುತ್ರಿ ಶ್ರೇಯಾ ಆರ್.ರೇವಣಕರ್, ಪುತ್ರ ಸಾಹಿಲ್.ಆರ್.ರೇವಣಕರ್ ಇತರರು ಇದ್ದರು. ಇದೇ ವೇಳೆ ಉಭಯ ಶ್ರೀಗಳ ಸಮ್ಮುಖದಲ್ಲಿ ವೈಕುಂಠ ಟ್ರಸ್ಟ್ ಪದಾಧಿಕಾರಿಗಳಿಗೆ ನಲ್ಲೂರು ರಾಘವೇಂದ್ರ, ನಲ್ಲೂರು ಅರುಣಾಚಲ ಮೋಕ್ಷ ವಾಹನದ ಕೀ ಹಸ್ತಾಂತರಿಸಿದರು.

ವಿವ ಟೆಕ್ ಕಚೇರಿಯಲ್ಲಿ ಕ್ರಿಸ್ಮಸ್ ಸಡಗರ

ಒಟ್ಟು ಓದುಗರ ಸಂಖ್ಯೆ : 1233+

ಬೀದರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವೀರ ಬಾಲ ದಿವಸ ಆಚರಣೆ

ಒಟ್ಟು ಓದುಗರ ಸಂಖ್ಯೆ : 1317+

ಕಾಲುನಡಿಯಲ್ಲಿ ಮಾಗಡಿಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ.

ಒಟ್ಟು ಓದುಗರ ಸಂಖ್ಯೆ : 1776+

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಎರಕಟ್ಟೆ ಬಳಿ ಗಂಡಾನೆ ಸಾವು

ಒಟ್ಟು ಓದುಗರ ಸಂಖ್ಯೆ : 1787+

ನ್ಯಾಯಾಲಯಗಳಲ್ಲಿ 2026 ರ ಜನವರಿ 2 ರಿಂದ 90 ದಿನಗಳ ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 2.0″ ಅಭಿಯಾನ..

ಒಟ್ಟು ಓದುಗರ ಸಂಖ್ಯೆ : 1875+

ಇಂದು ಸಿಎಂ ಸಿದ್ದರಾಮಯ್ಯ ದಾವಣಗೆರೆಗೆ

ಒಟ್ಟು ಓದುಗರ ಸಂಖ್ಯೆ : 1903+

ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಕೆ.ಹೆಚ್ ಮುನಿಯಪ್ಪ

ಒಟ್ಟು ಓದುಗರ ಸಂಖ್ಯೆ : 2002+

ವಿದ್ಯಾನಗರ ಪೊಲೀಸರ ಕಾರ್ಯಾಚರಣೆ: ಅಕ್ರಮ ಮಾದಕ ವಸ್ತು ಮಾರಾಟ-ಸೇವನೆ; ನಾಲ್ವರು ಬಂಧನ

ಒಟ್ಟು ಓದುಗರ ಸಂಖ್ಯೆ : 1909+

ಶಾಮನೂರು ಶಿವಶಂಕರಪ್ಪ ಸ್ಮೃತಿ ಸ್ಥಳಕ್ಕೆ ಎಚ್.ಡಿ. ಕುಮಾರಸ್ವಾಮಿ ನಮನ

ಒಟ್ಟು ಓದುಗರ ಸಂಖ್ಯೆ : 1921+

ಅದ್ದೂರಿಯಾಗಿ ನಡೆದ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ

ಒಟ್ಟು ಓದುಗರ ಸಂಖ್ಯೆ : 1966+

ಮನುಸ್ಮೃತಿ ದಹನ ದಿನ

ಒಟ್ಟು ಓದುಗರ ಸಂಖ್ಯೆ : 1931+

ಹಿಟ್ ಅಂಡ್ ರನ್ ಅಪಘಾತದಲ್ಲಿ ಮರಣ ಹೊಂದಿದ ರಾಜನಾಯಕನ ಕುಟುಂಬಕ್ಕೆ ಸರ್ಕಾರದ ವತಿಯಿಂದ 2 ಲಕ್ಷ ಪರಿಹಾರ

ಒಟ್ಟು ಓದುಗರ ಸಂಖ್ಯೆ : 4599+

ಚಿಕ್ಕತುಷ್ಟೂರಿನಲ್ಲಿ 13.5 ಎಕರೆ ವ್ಯಾಪ್ತಿಯಲ್ಲಿ ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ನಿರ್ಮಾಣ

ಒಟ್ಟು ಓದುಗರ ಸಂಖ್ಯೆ : 4582+

ಯೇಸು ಕ್ರಿಸ್ತನ ಹುಟ್ಟುಹಬ್ಬ (ಕ್ರಿಸ್‌ಮಸ್) ಕುರಿತು ಲೇಖನ

ಒಟ್ಟು ಓದುಗರ ಸಂಖ್ಯೆ : 4796+

ಅಟಲ್ ಎಂಬ ಅಜಾತಶತ್ರು.

ಒಟ್ಟು ಓದುಗರ ಸಂಖ್ಯೆ : 4806+

ಶಾಂತಿದೂತ ಏಸುಕ್ರಿಸ್ತನ ಜನುಮದಿನ

ಒಟ್ಟು ಓದುಗರ ಸಂಖ್ಯೆ : 5000+

ಮಾರ್ಕ್ - 45 ??? ಅಸಲಿ ಕಹಾನಿ

ಒಟ್ಟು ಓದುಗರ ಸಂಖ್ಯೆ : 5045+

ಕಾಂಗ್ರೆಸ್ ಸರ್ಕಾರದ ದ್ವೇಷಭಾಷಣ ಅಪರಾಧಗಳ ಮಸೂದೆ ಕೂಡಲೇ ವಾಪಸ್ ಪಡೆಯುಂತೆ  ಬಿಜೆಪಿ ಪ್ರತಿಭಟನೆ

ಒಟ್ಟು ಓದುಗರ ಸಂಖ್ಯೆ : 7301+

ದಾವಣಗೆರೆ ಜಿಲ್ಲೆಯ 240 ಕಾರ್ಖಾನೆಗಳಲ್ಲಿ ಸುರಕ್ಷತಾ ಕ್ರಮಗಳಿದೆಯೇ? ಅವಘಡ ತಪ್ಪಿಸಲು ತಕ್ಷಣ ಪರಿಶೀಲನೆ ಅಗತ್ಯ

ಒಟ್ಟು ಓದುಗರ ಸಂಖ್ಯೆ : 7394+

ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಶಾಶ್ವತ ಯೌಗಿಕ ಹಾಗೂ ನೈಸರ್ಗಿಕ ಕೃಷಿ ಕುರಿತು ಕಾರ್ಯಗಾರ

ಒಟ್ಟು ಓದುಗರ ಸಂಖ್ಯೆ : 7419+

ಪುನೀತ್ ರಾಜ್‍ಕುಮಾರ್ ಕಪ್’ ಸೀಸನ್ 4 ಚಾಂಪಿಯನ್

ಒಟ್ಟು ಓದುಗರ ಸಂಖ್ಯೆ : 7422+

ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣ

ಒಟ್ಟು ಓದುಗರ ಸಂಖ್ಯೆ : 7431+

ದಾವಣಗೆರೆ ಆನಗೋಡು ಗ್ರಾಮದಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ

ಒಟ್ಟು ಓದುಗರ ಸಂಖ್ಯೆ : 7440+

ನ್ಯೂ ಇಯರ್ ಭದ್ರತೆಗೆ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮ

ಒಟ್ಟು ಓದುಗರ ಸಂಖ್ಯೆ : 7715+

ಉದ್ಯಾನ ನಗರಿಯಲ್ಲಿ ಕ್ರಿಸ್ಮಸ್ ಸಂಭ್ರಮ.

ಒಟ್ಟು ಓದುಗರ ಸಂಖ್ಯೆ : 7724+

ಡ್ರಗ್ಸ್ ಕೇಸಲ್ಲಿ ಭಾಗಿಯಾದವರ ಮೇಲೆ ಮುಲಾಜಿಲ್ಲದೇ ಕ್ರಮವೆಂದ್ರು ಎಸ್ಪಿ ಉಮಾ ಪ್ರಶಾಂತ್..

ಒಟ್ಟು ಓದುಗರ ಸಂಖ್ಯೆ : 10083+

ಚಿರತೆಗಿಟ್ಟಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ, 3 ತಾಸು ಬೋನಿನಲ್ಲೇ ಚೀರಾಟ !

ಒಟ್ಟು ಓದುಗರ ಸಂಖ್ಯೆ : 10255+

ಡಿಸೆಂಬರ್ 29 ರಂದು ಬೊಮ್ಮಗೊಂಡೇಶ್ವರ ದೇವಸ್ಥಾನ ಭೂಮಿ ಪೂಜೆ

ಒಟ್ಟು ಓದುಗರ ಸಂಖ್ಯೆ : 10268+

ಮುದೇನೂರು ಗ್ರಾಮದ ನವೀನ್ ಕುಮಾರ ಕಡಾರಿ ಭಗತ್ ಸಿಂಗ್ ಜನ್ಮಸ್ಥಳ ಬಂಗಾಕ್ಕೆ 2300 ಕಿ.ಮೀ ಸೈಕಲ್ ಪಯಣ

ಒಟ್ಟು ಓದುಗರ ಸಂಖ್ಯೆ : 10596+

2025 ವರ್ಷಕ್ಕೆ ಗುಡ್ ಬೈ ಹೇಳಲು ದಿನಗಣನೆ ಸಂಭ್ರಮ ಮತ್ತು ಸುರಕ್ಷತಾ ಕ್ರಮ

ಒಟ್ಟು ಓದುಗರ ಸಂಖ್ಯೆ : 10758+

ಬುದ್ಧಿಶಕ್ತಿ, ವಿವೇಕ ಮತ್ತು ಜ್ಞಾನದಿಂದಲೇ ಹಕ್ಕು–ಸೌಲಭ್ಯಗಳ ಸಾಧನೆ: ಜಿ.ಬಿ. ವಿನಯ್ ಕುಮಾರ್

ಒಟ್ಟು ಓದುಗರ ಸಂಖ್ಯೆ : 10822+

ನಲ್ಲೂರು ಜ್ಯುಯಲರ್ಸ್ ಕುಟುಂಬದಿಂದ ಕೊಡುಗೆ.

ಒಟ್ಟು ಓದುಗರ ಸಂಖ್ಯೆ : 10846+

ಹುಣಸೂರು ನಗರದಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು

ಒಟ್ಟು ಓದುಗರ ಸಂಖ್ಯೆ : 10907+

ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತ್ತು ದೇವನಹಳ್ಳಿ ಮಂಡಲ ಪದಾಧಿಕಾರಿಗಳ ಆಯ್ಕೆ

ಒಟ್ಟು ಓದುಗರ ಸಂಖ್ಯೆ : 10891+

ರಾಷ್ಟ್ರೀಯ ರೈತರ ದಿನ

ಒಟ್ಟು ಓದುಗರ ಸಂಖ್ಯೆ : 10881+

ತಹಸೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳಿಗೆ ಶಾಸಕರ ಗ್ರಾಮ ಸಂಚಾರದಿಂದ ವಿನಾಯ್ತಿ ನೀಡುವಂತೆ ಮನವಿ

ಒಟ್ಟು ಓದುಗರ ಸಂಖ್ಯೆ : 12885+

ಇಸ್ರೋ ಜಾಗತಿಕ ಬ್ರಾಡ್‌ಬ್ಯಾಂಡ್ ಉಪಗ್ರಹ ಉಡಾವಣೆ

ಒಟ್ಟು ಓದುಗರ ಸಂಖ್ಯೆ : 13338+

ಹೆಣ್ಣುಮಕ್ಕಳು ಸ್ವಾವಲಂಬಿಯಾಗಲು ಪ್ರಯತ್ನಿಸಬೇಕು ಡಾ. ವಿಶಾಲಾಕ್ಷಿ ವಿ. ಕರಡ್ಡಿ

ಒಟ್ಟು ಓದುಗರ ಸಂಖ್ಯೆ : 13373+

ಕೈ ಮುಗಿತಿನಿ ಕಿತ್ತಾಡ್ಬೇಡ್ರಪ್ಪೋ....ನಾಯಕದ್ವಯರ ಕುರ್ಚಿ ಕದನ ಹೈರಾಣಾದ ಕಾಂಗ್ರೆಸ್ ಹೈ ಕಮಾಂಡ್

ಒಟ್ಟು ಓದುಗರ ಸಂಖ್ಯೆ : 13364+

ರಾಷ್ಟ್ರೀಯ ಗಣಿತ ದಿನ

ಒಟ್ಟು ಓದುಗರ ಸಂಖ್ಯೆ : 13617+

ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್: ಕೋಲಾರದ ಜಗದೀಶ್ ಕೆ.ಸಿ.ಗೆ ಚಿನ್ನ–ಕಂಚು

ಒಟ್ಟು ಓದುಗರ ಸಂಖ್ಯೆ : 13719+

ಮುಕ್ತಿ ಕಾಲೋನಿಯ ಬಾಳೆ ತೋಟದಲ್ಲಿ ನಿತ್ರಾಣವಾಗಿದ್ದ ಹುಲಿ ಸೆರೆ

ಒಟ್ಟು ಓದುಗರ ಸಂಖ್ಯೆ : 13735+

ಚಿಕ್ಕೋಡಿ ನ್ಯಾಯಾಲಯ ಆವರಣದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ

ಒಟ್ಟು ಓದುಗರ ಸಂಖ್ಯೆ : 13725+

ಬಿಸಿ ನೀರಿಗೆ ಬಿದ್ದು ಎರಡು ವರ್ಷದ ಹೆಣ್ಣು ಮಗು ಸಾವು

ಒಟ್ಟು ಓದುಗರ ಸಂಖ್ಯೆ : 13753+

ಗಡಿಜಿಲ್ಲೆಯಲ್ಲಿ‌ ಹುಲಿಗಳ‌ ಓಡಾಟ

ಒಟ್ಟು ಓದುಗರ ಸಂಖ್ಯೆ : 18625+

ಜೈ ಹನುಮಾನ್

ಒಟ್ಟು ಓದುಗರ ಸಂಖ್ಯೆ : 18900+

ಕಲೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದೆ.ಪರಮೇಶ್ವ ಪಾಟೀಲ್ ತಡಪಳ್ಳ

ಒಟ್ಟು ಓದುಗರ ಸಂಖ್ಯೆ : 18969+

ಕೊರಟಗೆರೆಯಲ್ಲಿ ತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವ

ಒಟ್ಟು ಓದುಗರ ಸಂಖ್ಯೆ : 19068+