17 ವರ್ಷಗಳ ಬಳಿಕ ಚೆನ್ನೈ ಕೋಟೆಗೆ ಆರ್‌ಸಿಬಿ ‘ರಾಯಲ್‌’ ಎಂಟ್ರಿ!

ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ್ || ಸ್ಥಳ : ಬೆಂಗಳೂರು
ವರದಿ ದಿನಾಂಕ : 28-03-2025

17 ವರ್ಷಗಳ ಬಳಿಕ ಚೆನ್ನೈ ಕೋಟೆಗೆ ಆರ್‌ಸಿಬಿ ‘ರಾಯಲ್‌’ ಎಂಟ್ರಿ!

ಚೆನ್ನೈ: ಐಪಿಎಲ್‌ನ ಹೈವೋಲ್ಟೇಜ್‌ ಪಂದ್ಯದಲ್ಲಿ ಕೊನೆಗೂ 17 ವರ್ಷಗಳ ಬಳಿಕ ಚೆನ್ನೈ ನೆಲದಲ್ಲಿ ಆರ್‌ಸಿಬಿ ಗೆದ್ದು ಬೀಗಿದೆ. ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 50 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್‌ನಲ್ಲಿ ಸತತ 2ನೇ ಗೆಲುವು ದಾಖಲಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 196 ರನ್‌ ಗಳಿಸಿತು. 197 ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಚೆನ್ನೈ 20 ಓವರ್‌ಗೆ 8 ವಿಕೆಟ್‌ ನಷ್ಟಕ್ಕೆ 146 ರನ್ನಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.

ಚೆಪಾಕ್‌ನಲ್ಲಿ ಉಭಯ ತಂಡಗಳು ಒಟ್ಟು 10 ಪಂದ್ಯಗಳನ್ನಾಡಿವೆ. ಅದರಲ್ಲಿ ಚೆನ್ನೈ 8 ಹಾಗೂ ಆರ್‌ಸಿಬಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಬರೋಬ್ಬರಿ 17 ವರ್ಷಗಳ ಬಳಿಕ ಚೆನ್ನೈ ನೆಲದಲ್ಲಿ ಆರ್‌ಸಿಬಿ ಗೆದ್ದು ಸಂಭ್ರಮಿಸಿದೆ.

ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭ ಪಡೆದುಕೊಂಡಿತ್ತು. ಪಿಲ್‌ ಸಾಲ್ಟ್‌ ಆರಂಭದಲ್ಲೇ ಸಿಕ್ಸರ್‌, ಬೌಂಡರಿಗಳೊಂದಿಗೆ ಅಬ್ಬರಿಸಿದರು. 16 ಬಾಲ್‌ಗೆ 5 ಫೋರ್‌, 1 ಸಿಕ್ಸರ್‌ನೊಂದಿಗೆ 32 ರನ್‌ ಗಳಿಸಿದರು. ಆದರೆ, ಧೋನಿ ಮಾಡಿದ ಮ್ಯಾಜಿಕ್‌ ಸ್ಟಂಪ್‌ಗೆ ಔಟಾಗಿ ನಿರ್ಗಮಿಸಿದ್ದು, ಆರ್‌ಸಿಬಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಈ ವೇಳೆ ವಿರಾಟ್‌ ಕೊಹ್ಲಿಗೆ ದೇವದತ್‌ ಪಡಿಕ್ಕಲ್ ಜೊತೆಯಾದರು. 2 ಸಿಕ್ಸರ್‌, 2 ಫೋರ್‌ ಬಾರಿಸಿ ಭರವಸೆ ಮೂಡಿಸಿದ್ದ ಪಡಿಕ್ಕಲ್‌‌ 27 ರನ್‌ ಗಳಿಸಿ ಔಟಾದರು. ಆಗ ಕೊಹ್ಲಿಗೆ ಕ್ಯಾಪ್ಟನ್‌ ರಜತ್‌ ಪಾಟೀದಾರ್‌ ಜೊತೆಯಾದರು. ನಿಧಾನಗತಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಕೊಹ್ಲಿ 30 ಬಾಲ್‌ಗೆ 31 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿ ಹೊರನಡೆದರು.

ಈ ವೇಳೆ ಏಕಾಂಗಿ ಹೋರಾಟ ನಡೆಸಿದ ಪಾಟೀದಾರ್‌ ಅರ್ಧಶತಕ ಗಳಿಸಿ (32 ಬಾಲ್‌, 51 ರನ್‌, 4 ಫೋರ್‌, 3 ಸಿಕ್ಸರ್‌) ತಂಡದ ಮೊತ್ತ ಹೆಚ್ಚಿಸಿದರು. ಈ ಮಧ್ಯೆ ಲಿಯಾಮ್‌ ಲಿವಿಂಗ್‌ಸ್ಟೋನ್ಸ್‌ 10, ಜಿತೇಶ್‌ ಶರ್ಮಾ 12 ರನ್‌ ಗಳಿಸಿ ಪೆವಿಲಿಯನ್‌ ಪರೇಡ್‌ ನಡೆಸಿದರು. ಕೊನೆ ಘಳಿಗೆಯಲ್ಲಿ ಟಿಮ್‌ ಡೇವಿಡ್‌ ಸ್ಫೋಟಕ ಬ್ಯಾಟಿಂಗ್‌ ಮಾಡಿದರು. ಕೊನೆ ಓವರ್‌ನಲ್ಲಿ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿ ಚೆನ್ನೈ ಬೌಲರ್‌ಗಳ ಬೆವರಿಳಿಸಿದರು. 3 ಸಿಕ್ಸರ್‌, 1 ಫೋರ್‌ನೊಂದಿಗೆ ಕೇವಲ 8 ಬಾಲ್‌ಗೆ 22 ರನ್‌ ಗಳಿಸಿ ಡೇವಿಡ್‌ ಮಿಂಚಿದರು. ಚೆನ್ನೈ ಪರ ನೂರ್‌ ಅಹ್ಮದ್‌ 3, ಮಥೀಷ ಪತಿರಾನ 2, ಖಲೀಲ್ ಅಹ್ಮದ್ ಮತ್ತು ಆರ್‌.ಅಶ್ವಿನ್‌ ತಲಾ 1 ವಿಕೆಟ್‌ ಕಿತ್ತರು.

ಆರ್‌ಸಿಬಿ ನೀಡಿದ 197 ರನ್‌ ಗುರಿ ಬೆನ್ನತ್ತಿದ ಸಿಎಸ್‌ಕೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಬೆಂಗಳೂರು ಬೌಲರ್‌ಗಳ ದಾಳಿಗೆ ಚೆನ್ನೈ ಬ್ಯಾಟರ್‌ಗಳು ಮಂಕಾದರು. ಮೊದಲ ಓವರ್‌ನಲ್ಲೇ ರಾಹುಲ್‌ ತ್ರಿಪಾಠಿ (5), ಕ್ಯಾಪ್ಟನ್‌ ಋತುರಾಜ್‌ ಗಾಯಕ್ವಾಡ್‌ (0) ವಿಕೆಟ್‌ ಕಿತ್ತು ಹ್ಯಾಜಲ್‌ವುಡ್‌ ಅಬ್ಬರಿಸಿದರು. ಬಳಿಕ ಬಂದ ದೀಪಕ್‌ ಹೂಡಾ (4), ಸ್ಯಾಮ್‌ ಕರ್ರನ್‌ (8) ಬ್ಯಾಟಿಂಗ್‌ ಮ್ಯಾಜಿಕ್‌ ಮಾಡುವಲ್ಲಿ ವಿಫಲರಾದರು. ರಚಿನ್‌ ರವೀಂದ್ರ ಏಕಾಂಗಿ ಹೋರಾಟ ಕೂಡ ನಡೆಯಲಿಲ್ಲ. ರವೀಂದ್ರ 31 ಬಾಲ್‌ಗೆ 41 ರನ್‌ ಗಳಿಸಿ (5 ಫೋರ್)‌ ಔಟಾದರು. ಈ ಹೊತ್ತಿಗೆ ಬಹುತೇಕ ಪಂದ್ಯ ಆರ್‌ಸಿಬಿ ಕೈವಶ ಎನ್ನುವಂತಾಯಿತು.

ಶಿವಂ ದುಬೆ 19 ರನ್‌ ಗಳಿಸಿ ಔಟಾದರು. ಈ ವೇಳೆ ಜೊತೆಯಾದ ರವೀಂದ್ರ ಜಡೇಜಾ ಮತ್ತು ಎಂಎಸ್‌ ಧೋನಿ ಚೆನ್ನೈ ಅಭಿಮಾನಿಗಳಿಗೆ ಬ್ಯಾಟಿಂಗ್‌ ಮನರಂಜನೆ ನೀಡಿದರು. ಜಡೇಜಾ 25 ರನ್‌ ಗಳಿಸಿದರು. ಕೊನೆ ಓವರ್‌ನಲ್ಲಿ ಸಿಕ್ಸರ್‌, ಫೋರ್‌ ಬ್ಯಾಟಿಂಗ್‌ ಮಾಡಿದ ಧೋನಿ 16 ಬಾಲ್‌ಗೆ 30 ರನ್‌ ಗಳಿಸಿದರು. ಕೊನೆಗೆ ಚೆನ್ನೈ 8 ವಿಕೆಟ್‌ ನಷ್ಟದೊಂದಿಗೆ 146 ರನ್‌ ಗಳಿಸಲಷ್ಟೇ ಶಕ್ತವಾಯಿತು. ಆರ್‌ಸಿಬಿ 50 ರನ್‌ಗಳ ಭರ್ಜರಿ ಜಯ ಸಾಧಿಸಿತು.

ವಿವ ಟೆಕ್ ಕಚೇರಿಯಲ್ಲಿ ಕ್ರಿಸ್ಮಸ್ ಸಡಗರ

ಒಟ್ಟು ಓದುಗರ ಸಂಖ್ಯೆ : 1454+

ಬೀದರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವೀರ ಬಾಲ ದಿವಸ ಆಚರಣೆ

ಒಟ್ಟು ಓದುಗರ ಸಂಖ್ಯೆ : 1537+

ಕಾಲುನಡಿಯಲ್ಲಿ ಮಾಗಡಿಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ.

ಒಟ್ಟು ಓದುಗರ ಸಂಖ್ಯೆ : 1996+

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಎರಕಟ್ಟೆ ಬಳಿ ಗಂಡಾನೆ ಸಾವು

ಒಟ್ಟು ಓದುಗರ ಸಂಖ್ಯೆ : 2007+

ನ್ಯಾಯಾಲಯಗಳಲ್ಲಿ 2026 ರ ಜನವರಿ 2 ರಿಂದ 90 ದಿನಗಳ ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 2.0″ ಅಭಿಯಾನ..

ಒಟ್ಟು ಓದುಗರ ಸಂಖ್ಯೆ : 2095+

ಇಂದು ಸಿಎಂ ಸಿದ್ದರಾಮಯ್ಯ ದಾವಣಗೆರೆಗೆ

ಒಟ್ಟು ಓದುಗರ ಸಂಖ್ಯೆ : 2123+

ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಕೆ.ಹೆಚ್ ಮುನಿಯಪ್ಪ

ಒಟ್ಟು ಓದುಗರ ಸಂಖ್ಯೆ : 2225+

ವಿದ್ಯಾನಗರ ಪೊಲೀಸರ ಕಾರ್ಯಾಚರಣೆ: ಅಕ್ರಮ ಮಾದಕ ವಸ್ತು ಮಾರಾಟ-ಸೇವನೆ; ನಾಲ್ವರು ಬಂಧನ

ಒಟ್ಟು ಓದುಗರ ಸಂಖ್ಯೆ : 2129+

ಶಾಮನೂರು ಶಿವಶಂಕರಪ್ಪ ಸ್ಮೃತಿ ಸ್ಥಳಕ್ಕೆ ಎಚ್.ಡಿ. ಕುಮಾರಸ್ವಾಮಿ ನಮನ

ಒಟ್ಟು ಓದುಗರ ಸಂಖ್ಯೆ : 2141+

ಅದ್ದೂರಿಯಾಗಿ ನಡೆದ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ

ಒಟ್ಟು ಓದುಗರ ಸಂಖ್ಯೆ : 2187+

ಮನುಸ್ಮೃತಿ ದಹನ ದಿನ

ಒಟ್ಟು ಓದುಗರ ಸಂಖ್ಯೆ : 2151+

ಹಿಟ್ ಅಂಡ್ ರನ್ ಅಪಘಾತದಲ್ಲಿ ಮರಣ ಹೊಂದಿದ ರಾಜನಾಯಕನ ಕುಟುಂಬಕ್ಕೆ ಸರ್ಕಾರದ ವತಿಯಿಂದ 2 ಲಕ್ಷ ಪರಿಹಾರ

ಒಟ್ಟು ಓದುಗರ ಸಂಖ್ಯೆ : 4820+

ಚಿಕ್ಕತುಷ್ಟೂರಿನಲ್ಲಿ 13.5 ಎಕರೆ ವ್ಯಾಪ್ತಿಯಲ್ಲಿ ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ನಿರ್ಮಾಣ

ಒಟ್ಟು ಓದುಗರ ಸಂಖ್ಯೆ : 4802+

ಯೇಸು ಕ್ರಿಸ್ತನ ಹುಟ್ಟುಹಬ್ಬ (ಕ್ರಿಸ್‌ಮಸ್) ಕುರಿತು ಲೇಖನ

ಒಟ್ಟು ಓದುಗರ ಸಂಖ್ಯೆ : 5016+

ಅಟಲ್ ಎಂಬ ಅಜಾತಶತ್ರು.

ಒಟ್ಟು ಓದುಗರ ಸಂಖ್ಯೆ : 5026+

ಶಾಂತಿದೂತ ಏಸುಕ್ರಿಸ್ತನ ಜನುಮದಿನ

ಒಟ್ಟು ಓದುಗರ ಸಂಖ್ಯೆ : 5220+

ಮಾರ್ಕ್ - 45 ??? ಅಸಲಿ ಕಹಾನಿ

ಒಟ್ಟು ಓದುಗರ ಸಂಖ್ಯೆ : 5265+

ಕಾಂಗ್ರೆಸ್ ಸರ್ಕಾರದ ದ್ವೇಷಭಾಷಣ ಅಪರಾಧಗಳ ಮಸೂದೆ ಕೂಡಲೇ ವಾಪಸ್ ಪಡೆಯುಂತೆ  ಬಿಜೆಪಿ ಪ್ರತಿಭಟನೆ

ಒಟ್ಟು ಓದುಗರ ಸಂಖ್ಯೆ : 7521+

ದಾವಣಗೆರೆ ಜಿಲ್ಲೆಯ 240 ಕಾರ್ಖಾನೆಗಳಲ್ಲಿ ಸುರಕ್ಷತಾ ಕ್ರಮಗಳಿದೆಯೇ? ಅವಘಡ ತಪ್ಪಿಸಲು ತಕ್ಷಣ ಪರಿಶೀಲನೆ ಅಗತ್ಯ

ಒಟ್ಟು ಓದುಗರ ಸಂಖ್ಯೆ : 7614+

ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಶಾಶ್ವತ ಯೌಗಿಕ ಹಾಗೂ ನೈಸರ್ಗಿಕ ಕೃಷಿ ಕುರಿತು ಕಾರ್ಯಗಾರ

ಒಟ್ಟು ಓದುಗರ ಸಂಖ್ಯೆ : 7639+

ಪುನೀತ್ ರಾಜ್‍ಕುಮಾರ್ ಕಪ್’ ಸೀಸನ್ 4 ಚಾಂಪಿಯನ್

ಒಟ್ಟು ಓದುಗರ ಸಂಖ್ಯೆ : 7643+

ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣ

ಒಟ್ಟು ಓದುಗರ ಸಂಖ್ಯೆ : 7651+

ದಾವಣಗೆರೆ ಆನಗೋಡು ಗ್ರಾಮದಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ

ಒಟ್ಟು ಓದುಗರ ಸಂಖ್ಯೆ : 7660+

ನ್ಯೂ ಇಯರ್ ಭದ್ರತೆಗೆ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮ

ಒಟ್ಟು ಓದುಗರ ಸಂಖ್ಯೆ : 7935+

ಉದ್ಯಾನ ನಗರಿಯಲ್ಲಿ ಕ್ರಿಸ್ಮಸ್ ಸಂಭ್ರಮ.

ಒಟ್ಟು ಓದುಗರ ಸಂಖ್ಯೆ : 7944+

ಡ್ರಗ್ಸ್ ಕೇಸಲ್ಲಿ ಭಾಗಿಯಾದವರ ಮೇಲೆ ಮುಲಾಜಿಲ್ಲದೇ ಕ್ರಮವೆಂದ್ರು ಎಸ್ಪಿ ಉಮಾ ಪ್ರಶಾಂತ್..

ಒಟ್ಟು ಓದುಗರ ಸಂಖ್ಯೆ : 10303+

ಚಿರತೆಗಿಟ್ಟಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ, 3 ತಾಸು ಬೋನಿನಲ್ಲೇ ಚೀರಾಟ !

ಒಟ್ಟು ಓದುಗರ ಸಂಖ್ಯೆ : 10475+

ಡಿಸೆಂಬರ್ 29 ರಂದು ಬೊಮ್ಮಗೊಂಡೇಶ್ವರ ದೇವಸ್ಥಾನ ಭೂಮಿ ಪೂಜೆ

ಒಟ್ಟು ಓದುಗರ ಸಂಖ್ಯೆ : 10488+

ಮುದೇನೂರು ಗ್ರಾಮದ ನವೀನ್ ಕುಮಾರ ಕಡಾರಿ ಭಗತ್ ಸಿಂಗ್ ಜನ್ಮಸ್ಥಳ ಬಂಗಾಕ್ಕೆ 2300 ಕಿ.ಮೀ ಸೈಕಲ್ ಪಯಣ

ಒಟ್ಟು ಓದುಗರ ಸಂಖ್ಯೆ : 10816+

2025 ವರ್ಷಕ್ಕೆ ಗುಡ್ ಬೈ ಹೇಳಲು ದಿನಗಣನೆ ಸಂಭ್ರಮ ಮತ್ತು ಸುರಕ್ಷತಾ ಕ್ರಮ

ಒಟ್ಟು ಓದುಗರ ಸಂಖ್ಯೆ : 10978+

ಬುದ್ಧಿಶಕ್ತಿ, ವಿವೇಕ ಮತ್ತು ಜ್ಞಾನದಿಂದಲೇ ಹಕ್ಕು–ಸೌಲಭ್ಯಗಳ ಸಾಧನೆ: ಜಿ.ಬಿ. ವಿನಯ್ ಕುಮಾರ್

ಒಟ್ಟು ಓದುಗರ ಸಂಖ್ಯೆ : 11042+

ನಲ್ಲೂರು ಜ್ಯುಯಲರ್ಸ್ ಕುಟುಂಬದಿಂದ ಕೊಡುಗೆ.

ಒಟ್ಟು ಓದುಗರ ಸಂಖ್ಯೆ : 11066+

ಹುಣಸೂರು ನಗರದಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು

ಒಟ್ಟು ಓದುಗರ ಸಂಖ್ಯೆ : 11129+

ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತ್ತು ದೇವನಹಳ್ಳಿ ಮಂಡಲ ಪದಾಧಿಕಾರಿಗಳ ಆಯ್ಕೆ

ಒಟ್ಟು ಓದುಗರ ಸಂಖ್ಯೆ : 11111+

ರಾಷ್ಟ್ರೀಯ ರೈತರ ದಿನ

ಒಟ್ಟು ಓದುಗರ ಸಂಖ್ಯೆ : 11101+

ತಹಸೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳಿಗೆ ಶಾಸಕರ ಗ್ರಾಮ ಸಂಚಾರದಿಂದ ವಿನಾಯ್ತಿ ನೀಡುವಂತೆ ಮನವಿ

ಒಟ್ಟು ಓದುಗರ ಸಂಖ್ಯೆ : 13105+

ಇಸ್ರೋ ಜಾಗತಿಕ ಬ್ರಾಡ್‌ಬ್ಯಾಂಡ್ ಉಪಗ್ರಹ ಉಡಾವಣೆ

ಒಟ್ಟು ಓದುಗರ ಸಂಖ್ಯೆ : 13558+

ಹೆಣ್ಣುಮಕ್ಕಳು ಸ್ವಾವಲಂಬಿಯಾಗಲು ಪ್ರಯತ್ನಿಸಬೇಕು ಡಾ. ವಿಶಾಲಾಕ್ಷಿ ವಿ. ಕರಡ್ಡಿ

ಒಟ್ಟು ಓದುಗರ ಸಂಖ್ಯೆ : 13593+

ಕೈ ಮುಗಿತಿನಿ ಕಿತ್ತಾಡ್ಬೇಡ್ರಪ್ಪೋ....ನಾಯಕದ್ವಯರ ಕುರ್ಚಿ ಕದನ ಹೈರಾಣಾದ ಕಾಂಗ್ರೆಸ್ ಹೈ ಕಮಾಂಡ್

ಒಟ್ಟು ಓದುಗರ ಸಂಖ್ಯೆ : 13585+

ರಾಷ್ಟ್ರೀಯ ಗಣಿತ ದಿನ

ಒಟ್ಟು ಓದುಗರ ಸಂಖ್ಯೆ : 13837+

ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್: ಕೋಲಾರದ ಜಗದೀಶ್ ಕೆ.ಸಿ.ಗೆ ಚಿನ್ನ–ಕಂಚು

ಒಟ್ಟು ಓದುಗರ ಸಂಖ್ಯೆ : 13939+

ಮುಕ್ತಿ ಕಾಲೋನಿಯ ಬಾಳೆ ತೋಟದಲ್ಲಿ ನಿತ್ರಾಣವಾಗಿದ್ದ ಹುಲಿ ಸೆರೆ

ಒಟ್ಟು ಓದುಗರ ಸಂಖ್ಯೆ : 13955+

ಚಿಕ್ಕೋಡಿ ನ್ಯಾಯಾಲಯ ಆವರಣದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ

ಒಟ್ಟು ಓದುಗರ ಸಂಖ್ಯೆ : 13947+

ಬಿಸಿ ನೀರಿಗೆ ಬಿದ್ದು ಎರಡು ವರ್ಷದ ಹೆಣ್ಣು ಮಗು ಸಾವು

ಒಟ್ಟು ಓದುಗರ ಸಂಖ್ಯೆ : 13973+

ಗಡಿಜಿಲ್ಲೆಯಲ್ಲಿ‌ ಹುಲಿಗಳ‌ ಓಡಾಟ

ಒಟ್ಟು ಓದುಗರ ಸಂಖ್ಯೆ : 18845+

ಜೈ ಹನುಮಾನ್

ಒಟ್ಟು ಓದುಗರ ಸಂಖ್ಯೆ : 19120+

ಕಲೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದೆ.ಪರಮೇಶ್ವ ಪಾಟೀಲ್ ತಡಪಳ್ಳ

ಒಟ್ಟು ಓದುಗರ ಸಂಖ್ಯೆ : 19192+

ಕೊರಟಗೆರೆಯಲ್ಲಿ ತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವ

ಒಟ್ಟು ಓದುಗರ ಸಂಖ್ಯೆ : 19290+