ವರದಿಗಾರರು :
ಫಯಾಜ್ ತೇಲಿ ||
ಸ್ಥಳ :
,ಬಾಗಲಕೋಟೆ
ವರದಿ ದಿನಾಂಕ :
08-09-2025
ರೈತರಿಗೆ ಒಳ್ಳೆಯ ಬೆಳೆ ಬರಲಿ ಎಂದು ಹಾರೈಸುವ ಜೋಕುಮಾರ್
ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮೀಣ ಪ್ರದೇಶದಲ್ಲಿ ಗಣೇಶ ಹಬ್ಬ ಮುಗಿಯುವ ದಿನವೇ ಅಶ್ವಿ ಕೊಡದಲ್ಲಿ ಸುಕುಮಾರ ಹುಟ್ಟಿ ಬರುತ್ತಾನೆ ಅವನು ಕುಮಾರ ತಾಯಿಯ ಆಶೀರ್ವಾದದಂತೆ ಏಳು ದಿನ ಮಾತ್ರ ಜೀವಂತ ಇರುತ್ತಾನೆ ಹೌದು ಇದು ಒಂದು ದೇವಿ ಆಜ್ಞೆಯ ದಂತೆ ಜೋಕುಮಾರನು ಲಕ್ಷ್ಮಿ ಕೊಡದಲ್ಲಿ ಏಳು ದಿನ ಕಾಲ ರೈತರ ಮನೆ ಮನೆಗೆ ತೆರಳಿ ಪೂಜೆ ಸಲ್ಲಿಸಿಕೊಳ್ಳುತ್ತಾನೆ .ರೈತರು ತಾನು ಬೆಳೆದ ಬೆಳೆಯನ್ನು ಆತನಿಗೆ ಭಿಕ್ಷರೂಪದಾಗಿ ಕೊಡುತ್ತಾರೆ, ಅವನ ಆಶೀರ್ವಾದದಿಂದ ರೈತರ ಜಮೀನುಗಳಿಗೆ ಹಾಕಲು ಕುಂಬಳ ಎಲೆಯಲ್ಲಿ ಅಂಬಲಿಯನ್ನು ಕೊಡುತ್ತಾರೆ, ರೈತರು ತಮ್ಮ ಜಮೀನಿನಲ್ಲಿ ಹಾಕುತ್ತಾರೆ, ಜೋಕುಮಾರನ ಆರು ದಿನಗಳ ಕಾಲ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಏಳನೇ ದಿನಕ್ಕೆ ತೆರಳಿ ಅಪರಾಧರಿಯಲ್ಲಿ ಅಗಸರ ಮನೆ ವಗೆ ಕಲ್ಲಿಗೆ ತಲೆ ಒಡೆದುಕೊಂಡು ಸಾಯುತ್ತಾನೆ .ಇದು ಅವನ ಹೆತ್ತ ತಾಯಿಯ ಆಜ್ಞೆ .ಅದೇ ರೀತಿ ಅವನ ತಲೆಯನ್ನು ಊರ ಹೊರಗೆ ತಂದು ಮಣ್ಣು ಮುಚ್ಚುತ್ತಾರೆ ,ನಂತರ 9 ದಿನದ ದಿನಕರ್ಮ ಮಾಡುತ್ತಾರೆ ಎಂದು ಆತನ ಮೂರ್ತಿ ತಯಾರು ಮಾಡಿದ ಈರಪ್ಪ ಅಮಾತಿ ಹೇಳಿದ್ದಾರೆ
